Monday, December 27, 2010

ತಾಯಿ ನುಡಿಗೆ ಪ್ರಾಮುಖ್ಯತೆ

ತಾಯಿನುಡಿಗೆ ಪ್ರಾಮುಖ್ಯತೆ ಕೊಡದೆ ಬೇರೆ ಭಾಷೆಗಳಿಗೆ ಮಣೆ ಹಾಕೋದ್ರಿಂದ ಏನೆಲ್ಲಾ ಅನಾಹುತಗಳು ಆಗಬಹುದು ಅಂತ ಪಟ್ಟಿ ಮಾಡ್ತಾ ಹೋದ್ರೆ ಸಾಕಸ್ಟು ವಿಚಾರಗಳಲ್ಲಿ ನಾವು ಹಿಂದೆ ಬಿದ್ದೀರೋದು ತಿಳಿಯುತ್ತೆ. ಅದ್ರಲ್ಲಿ ಮುಖ್ಯವಾಗಿರೋದು ವಿಜ್ಞಾನದಲ್ಲಿ ಹೊಸ ಹೊಸ ಅನ್ವೇಷಣೆಗಳು ನಡೆಯದಿರೊದು - ಪ್ರತಿಯೊಂದಕ್ಕೂ ಅಮೇರಿಕನ್ನರ ಮೇಲೆ ಅವಲಂಬಿತವಾಗಿರೋದು ಎದ್ದು ಕಾಣುತ್ತೆ.
ಹಲವಾರು ಭಾಷಾ-ಪರಿಣಿತರ ಹಾಗೂ ಬುದ್ದಿಜೀವಿಗಳ ಅಭಿಪ್ರಾಯದಂತೆ, ಏನಾದ್ರೂ ಹೊಸತನ ಹೂಟ್ಟೊದು ಅದು ಅಗತ್ಯವೆಂದಿನಿಸಿದಾಗ ಮಾತ್ರ. ಆದ್ರೆ ನಾವೆಲ್ರು ನಮ್ಮ ನಾಡಿಗೆ ಏನು ಅಗತ್ಯವಿದೆ ಅನ್ನೋದನ್ನ ಹುಡುಕೋ ಬದ್ಲು ಬೇರೆಯವರ ಅಗತ್ಯಗಳ್ನ ಪೂರ್ತಿ ಮಾಡೋ ನಿಟ್ಟಿನಲ್ಲೇ ಬದುಕ್ತಾ ಇದ್ದೀವಿ. ಕೇವಲ ಅಮೇರಿಕನ್ನರ ಅಗತ್ಯಗಳನ್ನ ಪೂರೈಸೊದ್ದಿಕ್ಕೆ ಸಾಕಗುವಸ್ಟು ಅಹರ್ತೆ ಪಡೆದು ಯಂತ್ರಗಳ ರೀತಿ ಕೆಲ್ಸ ಮಾಡ್ಕೊಂಡು, ಇದನ್ನೇ ಅಭಿವೃದ್ದಿ ಅಂದ್ಕೊಂಡು ಕತ್ಲಲ್ಲಿ ಬದುಕ್ತಾ ಇದ್ದೆವೆ. ತನ್ನ ಹುಟ್ಟುಭಾಷೆ / ತಾಯಿ ನುಡಿಯಲ್ಲೇ ಎಲ್ಲಾ ವಿಷಯಗಳನ್ನ ಅರ್ಥ ಮಾಡ್ಕೊಂಡು, ಎಲ್ಲಾ ಕ್ಷೇತ್ರಗಳಲ್ಲೂ ಕನ್ನಡವನ್ನೇ ಬಳಸಿ, ನಮ್ಮ ಜೀವನಕ್ಕೆ ಬೇಕಾಗುವಂತ ವಸ್ತುಗಳ್ನ ನಮ್ಮಲ್ಲೇ ತಯಾರು ಮಾಡುವಸ್ಟು ನಿಪುಣತೆ ಬೆಳಸ್ಕೊಂಡ್ರೆ ಮಾತ್ರ ಬೇರೆ ದೇಶಗಳಿಗಿಂತ ಭಿನ್ನವಾಗಿ ಅಭಿವೃದ್ದಿ ಹೊಂದಲು ಸಾಧ್ಯ.

ಈ ವಿಷಯದಲ್ಲಿ ಕನ್ನಡಿಗರು ಬೇಗನೆ ಎಚ್ಚೆತ್ತುಕೊಳ್ಳಬೇಕಿದೆ!

Thursday, December 16, 2010

ಕರ್ನಾಟಕದ ಏಳಿಗೆಗೆ ಕನ್ನಡಿಗರ ತಾಯ್ನುಡಿಯಾದ ಕನ್ನಡದಿಂದಲೇ ಮಾತ್ರ ಸಾದ್ಯ!

ಕರ್ನಾಟಕದ ಏಳಿಗೆಗೆ ಕನ್ನಡಿಗರ ತಾಯ್ನುಡಿಯಾದ ಕನ್ನಡದಿಂದಲೇ ಮಾತ್ರ ಸಾದ್ಯ! ಭಾರತ ಒಂದು ಭಾಷಾವಾರು ಪ್ರಾಂತ್ಯಗಳ ಒಕ್ಕೂಟವಾಗಿರೋದ್ರಿಂದ, ಪ್ರತಿಯೊಂದು ರಾಜ್ಯದ ಜನರು ತಮ್ಮ ಮಾತೃ ಭಾಷೆಗಳನ್ನೇ ಸಾಧನವಾಗಿ ಬಳಸಿದ್ದಲ್ಲಿ ಮಾತ್ರ ಭಾರತದ ಅಭಿವೃದ್ದಿ. 

ಕರ್ನಾಟಕ ಕುಲಪುರೋಹಿತರಾದ ಆಲೂರು ವೆಂಕಟರಾಯರೇ ಹೇಳುವಂತೆ " ಭರತ ಖಂಡವಿಲ್ಲದೆ ಕರ್ನಾಟಕ ಮುಂತಾದ ಪ್ರಾಂತಗಳು ಇಲ್ಲವೆಂಬುದು ಎಷ್ಟು ನಿಜವೋ ಅಷ್ಟೇ, ಕರ್ನಾಟಕ ಮುಂತಾದ ಪ್ರಾಂತಗಳಿಲ್ಲದೆ ಭರತಖಂಡವಿಲ್ಲವೆಂಬುದೂ ನಿಜವು. ಭಾರತೀಯನಲ್ಲದವನು ಹೇಗೆ ನಿಜವಾದ ಕರ್ನಾಟಕೀಯನಾಗಲಾರನೋ ಹಾಗೆಯೇ ಕರ್ನಾಟಕೀಯನಲ್ಲದವನು ನಿಜವಾದ ಭಾರತೀಯನಾಗಲಾರನು. ಕರ್ನಾಟಕವು ಕನ್ನಡಿಗರ ದೇಹವು ಮತ್ತು ಜೀವವು. ಪ್ರತಿಯೊಬ್ಬ ಜೀವನೂ ಹೇಗೆ ತನ್ನ ಜೀವದ ಮುಖಾಂತರವಾಗಿಯೇ ಪರಮಾತ್ಮನನ್ನು ಸಾಕ್ಷೀಕರಿಸಿಕೊಳ್ಳತಕ್ಕದ್ದೋ ಹಾಗೆ, ಕರ್ನಾಟಕಸ್ಥರು ಕರ್ನಾಟಕದ ಮುಖಾಂತರವಾಗಿಯೇ ಭಾರತಮಾತೆಯ ಸಾಕ್ಷಾತ್ಕಾರವನ್ನು ಮಾಡಿಕೊಳ್ಳತಕ್ಕದ್ದು. ಅವರಿಗೆ ಅನ್ಯಮಾರ್ಗವಿಲ್ಲ. ಅನ್ಯಮಾರ್ಗದಿಂದ ಅವಳನ್ನು ಕಾಣಲೆತ್ನಿಸುವುದು ಆತ್ಮವಂಚನೆಯು. ಅದು ಪರರ ಮುಖಾಂತರವಾಗಿ ಪರಮಾತ್ಮನನ್ನು ಕಾಣಲಿಚ್ಛಿಸುವಂತೆ ನಿರರ್ಥಕವು. ಭಾರತದ ಸೇವೆಯನ್ನು ಮಾಡುವುದಕ್ಕೆ ಹದಿನಾರಾಣೆ ಕರ್ನಾಟಕತ್ವವನ್ನು ಹೊಂದಿರುವುದರಿಂದ ಮಾತ್ರಾ ಸಾಧ್ಯ. ಅರೆಕೊರೆ ಕರ್ನಾಟಕಸ್ಥರು ಹಾಗೆ ಮಾಡಲಾರರೆಂಬುದು ಸ್ಪಷ್ಟ."
ಎಸ್ಟು ಸತ್ಯವಿದೆ ಅಲ್ವೇ?

ಆದ್ರೆ ನಮ್ಮ ಗ್ರಹಚಾರ ಮತ್ತು ತಮಾಷೆ ನೋಡಿ.
 ಶಾಲೆಗಳಲ್ಲಿ ಇಂದಿಗೂ, ಹಿಂದೀ, ಭಾರತದ ರಾಷ್ಟ್ರಭಾಷೆ ಅನ್ನೋ ಸುಳ್ಳು ಮಾಹಿತಿಯನ್ನ ಮಕ್ಕಳ ತಲೇಲಿ "ರಾಷ್ಟ್ರೀಯತೆ"ಯ ನೆಪವೊಡ್ಡಿ ತುರುಕ್ತಾನೇ ಇದ್ದಾರೆ.ಇದರಿಂದ ತಮ್ಮ ಭಾಷೆಯನ್ನ ಮಾತ್ನಾಡೊದೆ ಕೀಳು ಎಂಬೋ ಸಂಕುಚಿತ ಮನೋಭಾವನೆ ಬೆಳಿತ ಇರೋದಂತೂ ಸತ್ಯ.
ಈ ದಶಕದ ಬಹಳ ಮುಖ್ಯವಾದ ಅನ್ವೇಷಣೆಗಳು.

೧) ಮಾನವನ ಸಂಪೂರ್ಣ DNA ಬೆಳಕಿಗೆ!:
ಸುಮಾರು ೨೦೦೧ ರಲ್ಲಿ ಸಂಕೀರ್ಣ ಮಾನವ ಜೀವಿಗಳ ರಚನೆಗೆ ತಳಹದಿಯಾದ DNA ಜೋಡಣೆ (adenine, guanine, thaimine ಮತ್ತು cytosine ಎಂಬ ನಾಲ್ಕು ರಾಸಾಯನಿಕ ಕಣಗಳ (nucleotides) ವಿವಿಧ ಜೋಡಣೆ) ಯನ್ನು ಸಂಪೂರ್ಣವಾಗಿ ಕಂಡುಹಿಡಿಯಲಾಯಿತು. ಇದಕ್ಕೂ ಮೊದಲು ವಿಜ್ಞಾನಿಗಳಿಗೆ ಗೊತ್ತಿದ್ದ ಅಂಶವೆಂದರೆ DNA ಜೋಡಣೆ, ಜೀವ ಸಂಕುಲದ ಅಗಾಧ ವಿವಿಧತೆಗೆ ಕಾರಣವೆಂಬುದು ಅಸ್ಟೆ. ಆದರೆ ಈ ಸಂಕೀರ್ಣ DNA ಹೇಗೆ ನಮ್ಮೆಲ್ಲೆರ ರಚನೆಗೆ ನಾಂದಿಯಾಯಿತು ಎಂಬುದರ ಜೊತೆಗೆ, ಹೇಗೆ ಮತ್ತು ಏಕೆ ಮಾನವರು ಹಲವಾರು ರೋಗಗಳಿಗೆ ಬಲಿಯಾಗುತ್ತಾರೆ ಎಂಬುದನ್ನು ಬಹಳ ಸಂಕ್ಷಿಪ್ತವಾಗಿ ತಿಳಿಯಲು ಕೂಡ ಸಹಕಾರಿಯಾಗಿದೆ. ಈ ಮಾಹಿತಿಗಳಿಂದ ಇನ್ನಸ್ಟು ಹೊಸ ಹೊಸ ವಿಚಾರಗಳು ಬೆಳಕಿಗೆ ಬರಲ್ಲಿದ್ದು ಹಲವಾರು ರೋಗಗಳಿಗೆ ಮದ್ದನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾಗಲ್ಲಿದ್ದೇವೆ.

೨) ಉರಿಯೂವಿಕೆ (Inflammation) ಯ ಇನ್ನೊಂದು ಮುಖ:

ಆಕಸ್ಮಿಕವಾಗಿ ಕಯ್ ಬೆರಳು ಕೊಯ್ದುಕೊಂಡ್ರೆ ತಕ್ಷಣವೇ ನಮ್ಮ ರಕ್ತದಲ್ಲಿರುವ ಸೈನಿಕ ಜೀವ ಕೋಶಗಳು (Immune cells) ಮುನ್ನುಗ್ಗಿ ಹೊರ ಜೀವಿಗಳಿಂದ ಯಾವುದೇ ರೀತಿಯ ತೊಂದರೆಯಾಗದಂತೆ ರಕ್ಷಿಸುತ್ತವೆ. ಆದರೆ ಇದೆ ಸೈನಿಕ ಜೀವ ಕೋಶಗಳು ಹಲವಾರು ಕೆಟ್ಟ ರೋಗಗಳಿಗೂ(ಉದಾಹರಣೆ: ಕ್ಯಾನ್ಸರ್, ಮೆದುಳಿಗೆ ಸಂಬಂಧಪಟ್ಟವು, ಹೃದಯಕ್ಕೆ ಸಂಬಂಧಪಟ್ಟವು) ಕಾರಣವಾಗಬಹುದು ಎಂಬ ಅಂಶ ಬೆಳಕಿಗೆ ಬಂದಿದೆ.